Dombivli's ' Mysore Sangith Vidyalay,' bags the Award !

(26th National Kannada Conference held at New-Delhi, presented the Award to ' The Mysore Sangith Vidyalay,' Dombivli, Mumbai, Maharashtra), ,ಇತ್ತೀಚೆಗೆ ಹೊಸ- ದೆಹಲಿಯಲ್ಲಿ ' ದೆಹಲಿ ಕನ್ನಡಿಗ ಪತ್ರಿಕೆ,' ಏರ್ಪಡಿಸಿದ್ದ, ’’೨೬ ನೆಯ ರಾಷ್ಟ್ರೀಯ ಕನ್ನಡ ಸಮ್ಮೇಳನ,’ ನಡೆದಾಗ, ಮುಂಬೈ ನ " ಉಪನಗರಿಯಲ್ಲಿರುವ ಡೊಂಬವಲಿಯ ಮೈಸೂರು ಸಂಗೀತ ವಿದ್ಯಾಲಯ " ಕ್ಕೆ "ಅತ್ಯುತ್ತಮ ಸಂಗೀತ ಶಿಕ್ಷಣ ಸಂಸ್ಥೆ " ಯೆಂಬ ಪ್ರಶಸ್ತಿಯನ್ನು ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ, ಪ್ರದಾನ ಮಾಡಲಾಯಿತು ! ತುಮಕೂರು ವಿಶ್ವವಿದ್ಯಾಲಯದ ಮಾಜೀ ಕುಲಪತಿ, ಪ್ರೊ. ಓ.ಅನಂತರಾಮಯ್ಯನವರು, ಶ್ರೀ ನಾಗಭೂಷಣರವರಿಗೆ ಶಾಲುಹೊದಿಸಿ ಸನ್ಮಾನಿಸುತ್ತಿದ್ದಾರೆ.


'ಬೆಂಗಳೂರಿನ ಕನ್ನಡಸಾಹಿತ್ಯ ಪರಿಷತ್ ನ ಅಧ್ಯಕ್ಷ, ' ಡಾ. ನಲ್ಲೂರ್ ಪ್ರಸಾದ್ ರವರು, ಮುಂಬೈನ 'ಮೈಸೂರು ಸಂಗೀತ ವಿದ್ಯಾಲಯ ' ಕ್ಕೆ, " ಬೆಸ್ಟ್ ಸಂಗೀತ ವಿದ್ಯಾಲಯ " ಸನ್ಮಾನದಿಂದ ಗೌರವಿಸಿದರು. ಶ್ರೀ ನಾಗಭೂಷಣರವರು, "ಪ್ರಶಸ್ತಿಪತ್ರ " ವನ್ನು ಸ್ವೀಕರಿಸುತ್ತಿದ್ದಾರೆ.


(26th National Kannada Conference at New Delhi, ) ೨೬ ನೆಯ ರಾಷ್ಟ್ರೀಯ ಕನ್ನಡ ಕಾನ್ಫರೆನ್ಸ್ ಹೊಸ ದೆಹಲಿ ಯಲ್ಲಿ ಶ್ರೀ ನಾಗಭೂಷಣರು, ಸಿಂಪೋಸಿಯಮ್ ಒಂದರಲ್ಲಿ ಭಾಗವಹಿಸಿದಾಗ ತೆಗೆದ ಚಿತ್ರ. ಶ್ರೀ ನಾಗಭೂಷಣರವರು, ಮುಂಬೈನ ಡೊಂಬವಲಿ ಉಪನಗರದಲ್ಲಿ ಸ್ಥಾಪಿಸಿರುವ " ಮೈಸೂರು ಸಂಗೀತ ವಿದ್ಯಾಲಯ," ದ ಜಂಟಿ- ಪ್ರಾಂಶುಪಾಲರು. ಅವರ ಪತ್ನಿ, ವಿದುಶಿ, ಶ್ರೀಮತಿ. ಉಮಾ ನಾಗಭೂಷಣರವರು, ಸಂಗೀತ ವಿದ್ಯಾಲಯದ ಪ್ರಾಂಶುಪಾಲರು.


'ಮುಂಬೈನ ಕನ್ನಡಾಭಿಮಾನಿಗಳು,' ಹಾಗೂ 'ಕರ್ನಾಟಕ ಸಂಗೀತಾಭಿಮಾನಿಗಳೆಲ್ಲಾ' ತಮ್ಮ ಶುಭಹಾರೈಕೆಗಳನ್ನು ಶ್ರೀ ನಾಗಭೂಷಣ ದಂಪತಿಗಳಿಗೆ ಸಲ್ಲಿಸಿದ್ದಾರೆ ! ಈ ಉತ್ಸಾಹೀ ದಂಪತಿಗಳು ಇನ್ನೂ ಹೆಚ್ಚು ಹೆಚ್ಚು ಯುವ-ಸಂಗೀತ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸಲೆಂದು ಆಶಿಸುತ್ತೇವೆ. ದೇವರು ಅವರಿಗೆ ಆಯುರಾರೋಗ್ಯ-ಭಾಗ್ಯಗಳನ್ನು ಕರುಣಿಸಲಿ !


Comments

Popular posts from this blog

ಮುಂಬಯಿಯ ಮೈಸೂರ್ ಸಂಗೀತ ವಿದ್ಯಾಲಯ ದೊಂಬಿವಲಿಯ ಆಡಳಿತಾಧಿಕಾರಿ ಶ್ರೀ. ಬಿ. ನಾಗಭೂಷಣ್ ಇನ್ನಿಲ್ಲ !

ಸನ್. ೨೦೧೨ ರ ಸಾಲಿನ, 'ಶ್ರೀ. ಪುರುಂದರದಾಸರ ಮತ್ತು ಶ್ರೀ. ತ್ಯಾಗರಾಜರ ಆರಾಧನಾ ಮಹೋತ್ಸವ', 'ಡೊಂಬಿವಲಿಯ, ಮೈಸೂರ್ ಸಂಗೀತ ವಿದ್ಯಾಲಯ' ದಲ್ಲಿ ! !

'ಮೈಸೂರು ಸಂಗೀತ ವಿದ್ಯಾಲಯ, ದೊಂಬಿವಲಿ', ಆಯೋಜಿಸಿದ್ದ, " ಶಂಕರ ವಿಜಯ," 'ಕಾವ್ಯವಾಚನ ಕಾರ್ಯಕ್ರಮ' ಯಶಸ್ವಿಯಾಗಿ ನೆರೆವೇರಿತು