Posts

Showing posts from February, 2012

ಸನ್. ೨೦೧೨ ರ ಸಾಲಿನ, 'ಶ್ರೀ. ಪುರುಂದರದಾಸರ ಮತ್ತು ಶ್ರೀ. ತ್ಯಾಗರಾಜರ ಆರಾಧನಾ ಮಹೋತ್ಸವ', 'ಡೊಂಬಿವಲಿಯ, ಮೈಸೂರ್ ಸಂಗೀತ ವಿದ್ಯಾಲಯ' ದಲ್ಲಿ ! !

Image
        ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಲಿಯ ಮೈಸೂರು ಸಂಗೀತ ವಿದ್ಯಾಲಯ(ರಿ) ಆಯೋಜಿಸಿದ, ಶ್ರೀ ಪುರುಂದರದಾಸರ ಮತ್ತು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ, ಡೊಂಬಿವಲಿ ಪೂರ್ವದಲ್ಲಿರುವ ಗಾಂಧಿನಗರದ 'ಧರ್ಮವೀರ ಆನಂದ ದಿಘೆ                                      ಸಭಾಗೃಹ’  ದಲ್ಲಿ,  ೨೦೧೨ ರ ಫೆಬ್ರವರಿ, ೫ ನೆಯ ತಾರೀಖು, ಭಾನುವಾರ ಮುಂಜಾನೆ  ೯-೩೦ ಗಂಟೆಗೆ ಆರಂಭಗೊಂಡು ಸಾಯಂಕಾಲ ೬-೪೫ ಕ್ಕೆ ಕೊನೆಗೊಂಡಿತು. ಆಗಮಿಸಿದ  ಮುಖ್ಯ ಅತಿಥಿಗಳು : ಶ್ರೀ. ಎಚ್.ಬಿ.ಎಲ್.ರಾವ್,( ಮಹಾರಾಷ್ಟ್ರ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, (ಕೆಲಸದ ಒತ್ತಡದಿಂದ ಅವರಿಗೆ ಬರಲಾಗಲಿಲ್ಲ) ಗೌರವಾನ್ವಿತ ಅತಿಥಿ ಶ್ರೀ ಸತೀಶ್ ಎನ್. ನಾಯಕ್,  (Chief/Gen Manager, Head, Finance & Banking Onida Group of Companies) ಕಾರ್ಯಕ್ರಮದ ಮೊದಲಿಗೆ, ವಿದ್ಯಾಲಯದ ಕಿರಿಯ, ಹಿರಿಯ ಹಾಗೂ ಪ್ರೌಢ ವಿದ್ಯಾರ್ಥಿಗಳು ಶ್ರೀ. ಪುರುಂದರದಾಸರ ಹಾಗೂ ಶ್ರೀ. ತ್ಯಾಗರಾಜರ ಕೃತಿಗಳನ್ನೂ ಸುಶ್ರಾವ್ಯವಾಗಿ ಸಭೆಯ ಮುಂದೆ ಪ್ರಸ್ತುತಪಡಿಸಿದರು. * ಮೈ.ಸಂ.ವಿ. ದಲ್ಲಿ  ಸಂಗೀತ ಶಾಸ್ತ್ರವನ್ನು ಅಭ್ಯಾಸ ಮಾಡುತ್ತಿರುವ ಮಕ್ಕಳು ಪ್ರಸ್ತುತಪಡಿಸಿದ ಕಾರ್ಯಕ್ರಮಗಳು : -ತವದಾಸೋಹಂ ದಾಶರಥೆ -ಪನ್ನಗಾಧಿಪತಿ ಶ್ರೀಪತಿ -ಎರಡನೆಯ ಬ್ಯಾಚ್ : -ಸುಜನ ಜೀವನ ರಾಮ ಸುಗುಣ ಭೂಷಣ -ನಾರಸಿಂಹನೆಂಬ ದೇವನು -ಜೂನಿಯರ್ ವಿದ್ಯಾರ್ಥಿಗಳು ಪರೀಕ್ಷೆ